Tuesday, April 29, 2008

Nudi Mathu..

ಆನೆಯು ಊಟ ಮಾಡುವಾಗ ಅದರ ತುತ್ತಿನಿಂದ ಒಂದು ಅಗಳು ಉದುರಿಬಿದ್ದರೆ ಅದಕ್ಕೆ ಏನೂ ನಷ್ಟವಿಲ್ಲ. ಅದರೆ, ಅದೊಂದು ಅಗುಳಿನಿಂದ ಇರುವೆಯೊಂದು ತನ್ನ ಇಡೀ ಸಂಸಾರದ ಹಸಿವೆಯನ್ನೇ ನೀಗಿಸಿಕೊಳ್ಳಬಲ್ಲದು. ಒಂದೊಂದು ತುತ್ತಿಗೂ ಕಷ್ಟಪಡುವ ಜನರು ದೇಶದಲ್ಲಿ ಲಕ್ಷಾಂತರ ಮಂದಿಯಿದ್ದಾರೆ. ಅದೇ ವೇಳೆ, ಒಂದೊಂದು ಊಟದಲ್ಲಿ ಹತ್ತಾರು ತುತ್ತುಗಳನ್ನು ಚೆಲ್ಲುವ ಮಂದಿಯೂ ಅಷ್ಟೇ ಸಂಖ್ಯೆಯಲ್ಲಿ ಇದ್ದಾರೆ. ಇವರಿಬ್ಬರ ನಡುವೆ ಸಂಪರ್ಕವೇರ್ಪಟ್ಟರೆ ಹಸಿವಿನ ಸಮಸ್ಯೆಯೇ ಉದ್ಬವಿಸಲಾರದೆನೋ...