Wednesday, February 27, 2008

Nudi Mathu

ದುರಾಸೆ ಅನ್ನೋದು ಮನುಷ್ಯನ ಮನಸಿನಲ್ಲಿ ಒಂದು ಗುಣ.
ಅದನ್ನೆಲ್ಲಾ ಒರತು ಪಡಿಸಿ ಬಾಳುವವನೆ ನಿಜವಾದ ಪ್ರಜ್ಞಾವಂತ ಮನುಷ್ಯ.

Nudi Mathu

ಮಾತು ಮಧುರವಾಗಿದ್ದರೆ ಎಲ್ಲರೂ ನಮ್ಮನ್ನು ಇಷ್ಟಪಡುತ್ತಾರೆ.
ಮಾತು ಒರಟಾಗಿದ್ದರೆ ದೂರವಿಡುತ್ತಾರೆ.
ಕೋಗಿಲೆಯಿಂದ ಮನುಷ್ಯರಿಗೆ ಏನು ಪ್ರಯೋಜನವಿದೆ?
ಕತ್ತೆ ನಮಗೇನು ಅಪಕಾರ ಮಾಡಿದೆ?
ಕೆಲಸವಾಗಬೇಕಿದ್ದರೆ ಕತ್ತೇ ಕಾಲನ್ನೇ ಹಿಡಯಬೇಕಿಲ್ಲ,
ಮಾತು ಸುಂದರವಾಗಿದ್ದರೂ ಸಾಕು,
ಯಾರನ್ನಾದರೂ ಮೆಚ್ಚಿಸಿ ಎನು ಬೇಕೋ ಅದನ್ನು ಪಡೆಯಬಹುದಲ್ಲವೆ?

ಮನದ ಮಾತು

ಮನದ ಮಾತು….
ಮನ ಒತ್ತಾಯ ಮಾಡಿತು….
ಹಾಳೆಯ ಹೊಲದಲಿ ಭಾವನೆಗಳ ಅಕ್ಷರ ಮಾಡಿ ಬೀಜಗಳ ಬಿತ್ತಲು….
ಮತ್ತದೆ ಮನ ಅಳುಕಿತು….
ಮಾಡಿದ ಒತ್ತಾಯಕೆತನ್ನದೆ ಗೂಡಿನಲ್ಲಿರುವ….
ಭಾವನೆಗಳ ಬುತ್ತಿಯ ಬಿಚ್ಚಲು..

Tuesday, February 26, 2008

Nanavalu

ನನ್ನವಾಲ ಕಣ್ಣುಗಳು
ತಾವರೆಯ ಏಸಲು
ಕಣ್ಣು ತೆರೆಸಲು
ಬೀಳಬೇಕು ಬಿಸಿಲು!!!!!

Nanavalu

ನನ್ನವಾಲ ಕಣ್ಣುಗಳು
ತಾವರೆಯ ಏಸಲು
ಕಣ್ಣು ತೆರೆಸಲು
ಬೀಳಬೇಕು ಬಿಸಿಲು!!!!!

ಹೀಗೊಂದು ಕವನ

ಅವಳ ನೆನಪಾದಾಗಲೆಲ್ಲ
ಹೀಗೆ...,
ಹಾಲಿಲ್ಲದ ಟೀ,
ನೀರಸ ಕೆಲಸ,
ಅವೇ
ಉಸಿರುಗಟ್ಟಿಸುತ್ತಿದ್ದ
ಮುಖಗಳು,
ಹೀಗೆ ಎಲ್ಲವೂ
ಏನೋ...
ಹೊಸದಾಗಿ ಕಂಡು,
ಮತ್ತೊಂದು ದಿನವ
ದೂಡಲು,
ನಾಳೆಯ ಕನಸ
ಕಾಣಲು,
ಸಜ್ಜಾಗುತ್ತೇನೆ.
ಹೆಜ್ಜೆ ಹೆಜ್ಜೆ..
ಇಡುತ.

ತೇಪೆ ಬಟ್ಟೆ

ಅಲ್ಲ ನಾ ಬರೆಯ
ಹೊರಟದ್ದು...ಕವನವಲ್ಲ..!!
ಮುರಿದ ಮನೆಗೆ ಹರಿದ ಛಾವಣಿ..
ತೂತ ಮುಚ್ಚಲುತೇಪೆ ಬಟ್ಟೆ.
ಕೆಂಪು,ಹಸಿರು,ಕೇಸರಿ,ನೀಲಿ,
ಬಿಳಿಹೀಗೆ ಹಲವಾರು..
ತೇಪೆ ಬಟ್ಟೆ..
ಯಾರು ಯಾರು ಯಾವ ಕಾಲಕ್ಕೋ
ಹಾಕಿದ ತೇಪೆ..
ಒಮ್ಮೆ ಮಳೆಗೆಒಮ್ಮೆ
ಬಿಸಿಲಿಗೆಮತ್ತೊಮ್ಮೆ ಚಳಿಗೆ.
ಬೆಳಕ ತಡೆಯಬಹುದೇ ??
ಗಾಳಿಯು ಬರಕೂಡದೇ..?
ಸೊಗಸೆನಿಸಿತು ನಾಲ್ವರಿಗೆ,
ಕುರಿಗಳ ಕಾಯ್ವರಿಗೆ.
ಹುರಿದುಂಬಿಸಿದರುಹುರಿದು ತಿಂದರೂ!!
ಕುರಿ ಮಂದೆಯ.
ತೇಪೆಯ ಮೇಲೆ ಮತ್ತೆ
ಅದೇಬಣ್ಣದ ತೇಪೆಗಳು
ಗಾಳಿ,ಬೆಳಕಿಲ್ಲಬೆಳಕ ಕಾಣದವರಿಗೆ
ಕತ್ತಲು ಕಪ್ಪಲ್ಲ..!
ತೇಪೆಯ ಮೇಲೊಂದು
ತೇಪೆ ಬೀಳುತಲೇ ಇರೆತಿರುಗಿತು ತಲೆ,ತೇಪೆಗಲ್ಲ..
ತೇಪೆ ಹಾಕಿಸಿ,ಹಾಕಿದವರಿಗೆ.
ನಮ್ಮ ತೇಪೆಯಲ್ಲವೇ
ಮುರುಕು ಮನೆಗೆ ಸೂರು
ನಮ್ಮ ತೇಪೆಯಲ್ಲವೇ
ಹರುಕು ಛಾವಣಿಗೆ ಶೋಭೆ..!!